ಎಂದಿಗಾದೀತು ಈ ದೇಶ

ಎಂದಿಗಾದೀತು ಈ ದೇಶ
ಎಲ್ಲರಂತೆ ತಾನೂ?
ಎಂದಿಗಾದೀತು ಇರದಂತೆ
ತರತಮ ಏನೇನೂ?

ಜನಮನಗಳ ನಡುವೆ-ಗೋಡೆ
ಎಂದಿಗೆ ಉರುಳುವುವು?
ಬಡವರ ಇರುಳುಗಳು-ಎಂದಿಗೆ
ಪೂರಾ ಕರಗುವುವು?
ಸೆರೆಯೊಳಿರುವ ಲಕ್ಷ್ಮಿ-ದೀನರ
ಕಡೆ ಹೊರಳುವಳೆಂದು?
ಗಾಳಿ ಬಿಸಿಲಿನಂತೆ – ಎಲ್ಲರ
ಬಳಿಸಾರುವಳೆಂದು ?

ಪಕ್ಷಪಾತವಿರದ ಪ್ರಕೃತಿ
ನೀಡಿದಂಥ ಸಿರಿಯು
ಸೋದದರೆಲ್ಲರಿಗೆ ಎಂದಿಗೆ
ಸಮ ಸಮ ದೊರೆಯುವುವು?
ಅನ್ನ ನೆರಳು ಅರಿವ-ಜೊತೆಗೇ
ಮರ್ಯಾದೆಯ ದುಡಿಮೆ
ಮೇಲು ಕೀಳು ಎನದೆ – ಎಂದಿಗೆ
ಎಲ್ಲರಿಗೊದಗುವುವು?

ಕವಿದ ಮಂಜು ಕರಗಿ-ಬೆಳಕಿಗೆ
ಏಳಲಂಥ ನಾಡು,
ಬಿಟ್ಟು ಹಳೆಯ ಹಾದಿ-ದೇಶ
ತುಳಿಯಲಿ ಹೊಸ ಜಾಡು;
ಪ್ರೇಮ ದುಡಿಮೆ ತ್ಯಾಗ-ತರಲಿ
ಹೊಸ ಬೆಲೆಯೊಂದನ್ನು,
ತುಳುಕಲಿ ಮಿಂಚನ್ನು – ಭಾವೀ
ಪ್ರಜೆಗಳ ಎಳೆಗಣ್ಣು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಣ – ಪೆದ್ದ
Next post ಅಣ್ವಸ್ತ್ರ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys